ಸರಿದ ಪರದೆ - ೨

Posted by ಅರುಂಧತಿ | Posted in | Posted on 2:02 AM


ಮೋತಿಲಾಲರ ಕಂದ ಗಾಂಧೀಜಿ ಬಳಿಗೆ ಬಂದ


"ಮೋತಿಲಾಲರಿಗೆ ಹುಟ್ಟಿರದಿದ್ದರೆ,ಮಹಾತ್ಮರ ಪಾಳಯಕ್ಕೆ ಬರದಿದ್ದರೆ ಜವಾಹರಲಾಲ್ ನೆಹೆರೂ ಅದೆಲ್ಲಿರುತ್ತಿದ್ದರು?"- ಮ್ಯಾಕ್ ನಮಾಲಾ ನೆಹೆರು,ಅದು ಜವಾಹರಲಾಲ್ ತಂದೆಯ ಹೆಸರು.ವಕೀಲಿ ವೃತ್ತಿಯಿಂದ ಮೊಗೆ-ಮೊಗೆದು ಹಣ ಗಳಿಸಿದರು.ಬ್ರಿಟಿಶ್ ಚಿಂತನೆಯನ್ನು,ಬ್ರಿಟಿಶ್ ನಿಷ್ಟೆಯನ್ನು ಮೈಗೂಡಿಸಿಕೊಂಡು ಅವರಿಗಿಂತ ಹೆಚ್ಚು ಆಂಗ್ಲ ಮಾಧ್ಯಮದವರಾಗಿದ್ದರು.ಅವರು ವಾಸಿಸುತ್ತಿದ್ದ "ಆನಂದ ಭವನ"ಆ ಕಾಲಕ್ಕೆ ಭವ್ಯ ಬಂಗಲೆ.ಅಲ್ಲಿ ಐಷಾರಾಮಿ ಬದುಕಿಗೆ ಬೇಕಾದ ಸೌಲಭ್ಯಗಳೆಲ್ಲ ಇದ್ದವು.ಸಾಕಷ್ಟು ಪ್ರಮಾಣದಲ್ಲಿಯೇ ಇದ್ದವು.ಮೋತಿಲಾಲರ ಪತ್ನಿ ಸ್ವರೂಪ್ ರಾಣೀ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ಎನಿಸುವಂತಿದ್ದಳು.ಭಾರತೀಯ ಸಭ್ಯತೆ-ಹಿಂದೂಧರ್ಮಗಳಲ್ಲೆಲ್ಲಾ ಅಕೆಗೆ ಅಪಾರ ಒಲವು.
ಇಬ್ಬರದೂ ಅಜಗಜಾಂತರ ವ್ಯತ್ಯಾಸ.ಒಬ್ಬರು ಭಾರತೀಯ ಚಿಂತನೆಗಳ ಪ್ರತೀಕವಾದರೆ ಮತ್ತೋಬ್ಬರು ಬ್ರೀಟಿಷ ದಾಸ್ಯದ ಉತ್ಪನ್ನ.ಇಂಥಹ ದ್ವಂದ್ವಗಳ ನಡುವೆ ಹುಟ್ಟಿ ಬೆಳೇದ ಮಗು ಮುಂದೆ ಹೇಗಾಗಬಹುದು ಎಂದರೆ ಸಹಜವಾಗಿಯೆ ಜವಾಹರಲಾಲರನ್ನು ತೋರಿಸಬಹುದು.
ಸಿರಿವಂತಿಕೆಯ ಘಮಂಡಿತನ,ಆಂಗ್ಲ ಭಾಷೆಯ ಹಮ್ಮು ಬಾಲಕ ನೆಹೆರೂವನ್ನು ಸಾಧ್ಯವಿದ್ದಷ್ಟೂ ಹಾಳುಗೆಡವಿತ್ತು.ಬಾಲ್ಯದಲ್ಲಿಯೇ ಅಂಟಿಕೊಂಡ ಸಿಗರೇಟು,ಮಧ್ಯಗಳ ವಟವೂ ತಮ ಪಾಲಿನದನ್ನು ಧಾರೆಯೆರೆದಿದವು.ತನ್ನ ಮಾಗ ಆಂಗ್ಲರಂತಾಗುವುದನ್ನು ನೋಡಿದ ತಂದೆಗೆ ಆನಂದವೋ ಆನಂದ!ಹೊರದೇಶದಿಂದ ಸ್ವಾಚುಗಳನ್ನೇ ಮಗನಿಗೆ ಕುಡಿಸುತ್ತಿದ್ದರೆಂದು ಆಗಿನ ಕೆಲವು ಲೇಖಕರು ಅಭಿಪ್ರಾಯಪಡುತ್ತಾರೆ.

ಹದಿನೈದು ಕಳೆಯುವ ವೇಳೆಗೆ ತಂದೆ ಮಗನನ್ನು ಇಂಗ್ಲೆಂಡಿಗೆ ಹಾರೋ ಪ್ರದೇಶಕ್ಕೆಕರೆತಂದರು.ಹಣ ಸುರುವಿ ಶಿಕ್ಶಣವನ್ನು ಖರಿದಿಸಿದರು ೧೯೦೭ರಲ್ಲಿರಬಹುದು,ನೆಹೆರೂ ಕೇಂಬ್ರಿಡ್ಜನ ಕಾಲೇಜಿಗೆ ಸೇರಿಕೋಣ್ಡರು.ಅಲ್ಲಿಂದ ಲಂಡನ್ನಿಗೆ ಬ್ಯಾರಿಸ್ಟರ್ ಗಿರಿ ಪಡೆಯಲಿಕ್ಕೆಂದು ಹೊರಟರು.
ಅಧ್ಯಯನದ ವೇಳೆಯಲ್ಲಿ ನೆಹೆರೂ ಮಾಡುತ್ತಿದ್ದ ಖರ್ಚಿಗೆ ಲೆಕ್ಕವೇ ಇರಲಿಲ್ಲ,ಬಿಳಿ ಹುಡುಗಿಯರನ್ನು ಸುತ್ತಾಡಿಸುವುದು,ಅವರಿಗೆ ಖರ್ಚು ಮಾಡುವುದು ಇವೆಲ್ಲಾ ನೆಹೆರೂರ ನಿತ್ಯ ಕಾಯಕ.ತಾಣು ವಾಸಕ್ಕಿದ್ದ ಮನೆಯ ಮಾಳೀಕರಿಗೆ,ಅವರ ಹೆಣ್ಣು ಮಕ್ಕಳಿಗೆ ಬಗೆ-ಬಗೆಯ ಗಿಫ್ಟು ನೀಡುವುದರಲ್ಲಿ ನೆಹೆರೂ ಯಾವಾಗಲೂ ಮುಂದು.ಆ ಮಾಲೀಕರುಗಳಿಗಂತೂ ಇಂತಹ ಬಕರಾ ಸಿಕ್ಕಿದ್ದಕ್ಕೆ ಅಸೀಮ ಆನಂದ!

ವಿದೇಶೀ ಚಿಂತನೆಗಳಿಂದ ಸೆಳೆಯಲ್ಪಟ್ಟ ನೆಹೆರೂ ಸಹಜವಾಗಿಯೇ ಇಟಲಿಯ ನಾಯಕ ಗ್ಯಾರಿಬಾಲ್ಡಿಯಿಂದ ಪ್ರಭಾವಿತರಾಗಿದ್ದರು.ಐರಿಷ್ ಚಳುವಳಿಗಳ ಚಿಂತನೆಗಳನ್ನು ಮೇಲಕುಹಾಕುತ್ತಿದ್ದರು.ಒಟ್ಟಿನಲ್ಲಿ ಸಾಗಬೇಕಾದ ಮಾರ್ಗ ಕಾಣದೇ ತೊಳಲಾಡುತ್ತಿದ್ದಂತಿತ್ತು ಅವರ ಬದುಕು.
ವಕೀಲಿ ವೃತ್ತಿಯಲ್ಲಿ ಅವರಿಗೆ ಹೆಚ್ಚಿನ ಆದಾಯವೇನೂ ಇರಲಿಲ್ಲ ಆದರೆ ತಂದೆಯ ಅಭಯಹಸ್ತ ಮಾತ್ರ ಸದಾ ತಲೆಯ ಮೇಲೆಯೇ ಇತ್ತು. ಸ್ವತ: ಮೋತಿಲಾಲರೇ ವಯಸಿಇಗೆ ಬಂದ,ದುಡುಯುತ್ತಿದ್ದ ಮಗನ ಖರ್ಚಿಗೆ ಹಣ ನೀಡುತ್ತಿದ್ದರು."ಅಯ್ಯೋ! ನನ್ನ ಮಗನ ದುಡೀಮೆಯಾ?ಅದು ಅವನ ಬದುಕಿಗೇ ಸಾಕಾಗೊಲ್ಲ"ಎಂದು ಮೂದಲಿಸುತ್ತಿದ್ದರು.ಮೊತೀಲಾಲರು ಮಹತ್ವಾಕಾಂಕ್ಶಿ.ಅದಾಗಲೇ ಸ್ವರಾಜ್ ಪಾರ್ಟಿಯ ಮೂಲಕ ಸಾಕಷ್ಟು ಹೆಸರುಗಳಿಸಿ ಭಾರತೀಯ ರಾಷ್ಟಿಯ ಕಾಂಗ್ರೆಸ್ಸಿನ ಅಧ್ಯಕ್ಶರಾಗಿಬಿಟ್ಟಿದ್ದರು.ತಮ ಮಗನೂ ತಮ್ಮದೇ ಹಾದಿ ತುಳಿಯಲಿ ಎಂಬ ಹೆಬ್ಬಯಕೆ ಅವರಿಗಿತ್ತು.
೧೯೨೯ ಆಸುಪಾಸು.ಕಾಂಗ್ರೆಸ್ಸಿನ ಅಧ್ಯಕ್ಶ ಪದವಿಗೆ ಚುಣಾವಣೆ ನಡೆಯಬೇಕಿತ್ತು.ಮೋತಿಲಾಲರ ನಂತರ ಕಾಂಗ್ರೆಸ್ಸನ್ನು ಮುನ್ನಡೆಸಬಲ್ಲ ಧೀಮಂತ ವ್ಯಕ್ತಿಯ ಹುಡುಕಾಟ ನಡೆದಿತ್ತು.ಸರ್ದಾರ್ ವಲಬಾಯ ಪಟೇಲರೇ ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬುದು ಬಹುತೇಕ ಕಾಂಗ್ರೇಸ್ಸಿಗರ ಅಭಿಪ್ರಾಯ.ಕೆಲವರು ಗಾಂಧಿಜಿಯೇ ಈ ಗಾದಿಯ ಮೇಲೆ ಕುಳಿತುಬಿಡಲಿ ಎಂದು ಭಾವಿಸಿದರು.ಗಾಂಧಿಜಿಯೇ ಹೋರಾಟದ ಸ್ನಾಯಕತ್ವ ವಹಿಸಲಿ ಎಂಬ ಕೋರಿಕೆಯನ್ನು ಮಂಡಿಸಿದವರಲ್ಲಿ ಪಟೇಲರೇ ಮೊದಲಿಗವರಾಗಿದ್ದರು.ಆದರೆ ಈ ಕೋರಿಕೆಯನ್ನು ನಿರ್ದಾಕ್ಶಿಣ್ಯವಾಗಿ ತಳೀಹಾಕಿದರು. ಕಾಂಗ್ರೆಸ್ಸಿನ ಜವಾಬ್ದಾರಿಹೊರಲಾರೆ ಎಂದುಬಿಟ್ಟಿದ್ದರು.ಸಹಜವಾಗಿಯೇ ಎಲ್ಲರ ಕಣ್ಣೂ ಪಟೇಲರತ್ತ ತಿರುಗಿತು.ಪ್ರಾಂತೀಯ ಸಮಿತಿಯಲ್ಲಿನ ಐವರು ಪಟೇಲರ ಹೆಸರನು ಸೂಚಿಸಿದರೆ,ಮೋತಿಲಾಲರ ಪ್ರಭಾವಕ್ಕೆ ಬಿದ್ದ ಮೂವರು ಜವಾಹರಲಾಲ್ ನೆಹೆರೂರವರ ಹೆಸರನ್ನು ಅನುಮೋದಿಸಿದರು.
ನಿಜ ಹೇಳಬೇಕೆಂದರೆ ಕಾಂಗ್ರೆಸ್ಸಿನ ಪಟ್ಟದ ಮೇಲೆ ಕುಳಿತುಕೋಳ್ಳೂವ ಯಾವ ಅರ್ಹತೆಯೂ ನೆಹೆರೂಗಿರಲ್ಲ.೧೯೨೯-೩೦ರ ವೆಳೇಗೆ ಕಾಂಗ್ರೆಸ್ಸುಬಲಿಷ್ಠವಾಗಿ ಬೆಳೆದಿತ್ತು.ಬ್ರಿಟಿಷ್ ಸಾಮ್ರಾಜ್ಯವನ್ನು ಕಿತ್ತೋಗೆಯಬಲ್ಲ ಏಕೈಕ ಅಸ್ತ್ರವಾಗಿ ನಿಂತಿತ್ತು.ಅಂತಹ ಕಾಂಗ್ರೆಸನ್ನು ಮುನ್ನಡೆಸಬಲ,ಗಾಂಧಿಜೀಯ ನಿಷ್ಠ ಅನುಯಾಯಿಗಿ ಅವರ ಚಿಂತನೆಗಳನ್ನು ಕೃತಿಗಿಳಿಸಬಲ್ಲ ತಾಕತ್ತು ಜವಾಹರಲಾಲರಿಗೆ ಖಂಡಿತ ಇರಲಿಲ್ಲ.ಅದೂ ಅಲ್ಲದೇ ವಯಸ್ಸಿನಲ್ಲಿ-ಅನುಭವಗಳಲ್ಲಿ ಪಟೇಲರಿಗಿಂತ ನೆಹೆರೂ ಕಿರಿಯರಾಗಿದ್ದರು.ದೇಶದ ಅತಿದೋಡ್ಡ ಸಂಸ್ಥೆಯೊಂದರ ಜವಾಬ್ದಾರಿ ಹೊರಬಲ್ಲ ಚಿಂತನಶೀಲತೆ - ವಿಚಾರ ಫ್ರಖರತೆಯೂ ಅವರದಾಗಿರಲಿಲ್ಲ.ಈ ಎಲ್ಲ ಕಾರಣಗಳಿಂದಾಗಿಯೇ ಕಾಂಗ್ರೆಸ್ಸಿನ ಹಿರಿಯರು,ಮುಂದಾಳುಗಳು ನೆಹೆರೂರನ್ನು ನಾಯಕರಾಗಿ ಒಪ್ಪಿಜೋಳ್ಳುವುದು ಸಾಧ್ಯವೇ ಇರಲಿಲ್ಲ.

ಆದರೆ. . .

ಗಾಂಧೀಜಿ ಬಿಡಲಿಲ್ಲ ಮೋತಿಲಾಲರ ಒತ್ತಡಕ್ಕೆ,ನೆಹೆರೂರ ಹಟಮಾರಿತನಕ್ಕೆ ಕಟ್ಟುಬಿದ್ದರು.ಪಟೇಲರ ಮೈದಡುವುತ್ತ ’ ನೆಹೆರೂನೇ ಅಧ್ಯಕ್ಶನಾಗಿ ಬಿಡಲಿ’ ಎಂದರು. ಪಟೇಲರು ದೂಸರಾ ಮಾತಾಡಲಿಲ್ಲ.ನೆಹೆರೂ ಕಾಂಗ್ರೆಸ್ಸಿನ ಅಧ್ಯಕ್ಶಗಿರಿ ವಹಿಸಿಕೊಂಡರು.ತಂದೆ ಮಗನಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು!. ಯಾವ ನೆಹೆರೂ ಕಮ್ಯುನಿಸ್ಟ್ ಸಿದ್ಧಾಂತದಡಿಗಳಲ್ಲಿ ಪಾರಿವಾರಿಕಾಧಿಕಾರವನ್ನು ಭಂಡುಬಿದ್ದು ವಿರೋಧಿಸುತ್ತಿದ್ದರೋ ಅದೇ ನೆಹೆರೂ ತಂದೆಯಿಂದ ಅಧಿಕಾರ ಪಡೆದು ಯುವರಾಜನಂತೆ ವರ್ತಿಸಿದ್ದರು. ನೆಹ್ರೂರ ಆಪ್ತರೆಲ್ಲರೂ ’ರಾಜನು ಸಿಂಹಾಸನವನ್ನು ಕುವರನಿಗೆ ಬಿಟ್ಟೂಕೊಟ್ಟಂತಾಯಿತು’ ಎಂತಲೇ ಗುಣಗಾನ ಮಾಡಿದ್ದರು. ಗಾಂಧೀಜಿ ಹಾಗೆಕೆ ಮಾಡಿದರು? ಎಂದಿಗೂ ತಾವು ಅಧಿಕಾರ ಬಯಸಿದವರಲ್ಲ.ತಮ ಮಕ್ಕಳನ್ನೂ ಅಧಿಕಾರದ ಬಳಿ ಸುಳಿಯ ಬಿಟ್ಟವರಲ್ಲ.ಹೀಗಿದ್ದವರು ನೆಹೆರೂಗೇಕೆ ಅಧಿಕಾರ ಕೊಟ್ಟು ದೇಶವನ್ನು ದುರಂತ ಕೂಪಕ್ಕೆ ತಳ್ಳೀದರು?ಈ ಪ್ರಶ್ನೆಗೆ ಉತ್ತರ ತುಂಬಾ ಕಠಿಣವಲ್ಲ.೧೯೨೯ ರಿಂದಲೇ ತನ್ನ ನಂತರ ತನ್ನ ಮಗನಿಗೆ ಅಧಿಕಾರ ಕೊಡಬೇಕೆಂದು ಮೋತಿಲಾಲರು ದುಂಬಾಲು ಬಿದ್ದಿದ್ದರು.ಅದನ್ನು ಪಕ್ಕಕ್ಕೆ ಸರಿಸಿ ಗಾಂಧೀಜಿ ಡಾ.ಅನ್ಸಾರಿಯನ್ನು ಅಧ್ಯಕ್ಶಗಿರಿಗೆ ಆಯ್ಕೆ ಮಾಡೀದರು.೧೯೨೮ರಲ್ಲಿ ಮತ್ತೆ ಮೋತಿಲಾಲರ ಒತ್ತಡ ಶುರುವಾಯ್ತು.೧೯೨೯ ಈ ಬಾರಿ ತಮ್ಮ ಮಗನಿಗೇ ಅಧಿಕಾರ ಸಿಗಬೇಕೆಂದು ಅವರು ಪಟ್ಟು ಹಿಡಿದು ಕುಳಿತರು.
ಜೆ.ಬಿ.ಕೃಪಲಾನಿ ಹೇಳುವಂತೆ, " ಈ ನಿರ್ಧಾರ ರಾಜಕೀಯವಾದುದಾಗಿರಲಿಲ್ಲ.ಬದಲಿಗೆ ಸ್ವಂತದಾಗಿತ್ತು.ಗಾಂಧೀಜಿ ಪಟೇಲರನ್ನು ತಮ್ಮವರೆಂದು ನಂಬಿದ್ದರು.ತಮ್ಮ ಎಲ್ಲ ನಿರ್ಧಾರಗಳನ್ನೂ ಅರಿತು,ಜಿರ್ಣಿಸಿಕೊಳ್ಳುವ ತಾಕತ್ತು ಪಟೇಲರಿಗಿದೆ ಎಂಬ ನಂಬಿಕೆ ಅವರಿಗಿತ್ತು.ನೆಹೆರೂ ಹಾಗಿರಲಿಲ್ಲ. ’ ನಾಣು ದಾರಿತಪ್ಪಿದ ಮೈಗಳ್ಳ ಮಗುವಿರಬಹುದು.ಆದರೂ ರಾಜಕೀಯವಾಗಿ ನಿಮ್ಮ ಕಂದನೇ ಅಲ್ಲವೇ?’ ಎನ್ನುತ್ತ ನೆಹೆರೂ ಗಾಂಧೀಜಿಯನ್ನು ಭಾವನಾತ್ಮಕವಾಗಿ ಹಿಡಿದುಬಿಟ್ಟಿದ್ದರು.ಹಾಗಾಗಿ ದಾರಿತಪ್ಪಿದ ಮಗ ತನ್ನನ್ನು ಬಿಟ್ಟು ಹೋಗಿಬಿಟ್ಟರೆ ಕಷ್ಟ ಎಂಬ ನೋವು ಗಾಂಧೀಜಿಯನ್ನು ಕಾಡಿದ್ದಿರಬೇಕು.ಅದಕ್ಕೇ ಇಂತಹ ಒಂದು ಘೋರ ನಿರ್ಣಯ ಹೊರಬಿದ್ದಿರಬಹುದು."
ಈ ಒಂದೇ ಒಂದು ನಿರ್ಣಯ ದೇಶದ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು.ಯಾವ ವ್ಯಕ್ತಿ ಸ್ಪಷ್ಟವಾದ ನಿರ್ಧಾರಗಳನ್ನು ಮಂಡಿಸಲಾರನೋ,ಗುರಿಯೆಡೆಗೆ ನಿರ್ದಿಷ್ಟ ಹೆಜ್ಜೆ ಇಡಲಾರನೋ,ತನ್ನ ಬದಿಕಿಗೆ ಬೇಕಾದ್ದನ್ನು ತಾನೇ ದುಡಿಯಲಾರನೋ ಅಂಥವನು ಸ್ವಾತಂತ್ರ್ಯ ಹೋರಾಟ ನಡೆಸುವ ದೊಡ್ಡದೊಂದು ಸಂಘಟನೆಯ ಜವಾಬ್ದಾರಿ ಹೇಗೆ ಹೊರಬಲ್ಲ ಹೇಳಿ.
ಈ ವಿಚಾರ ಹೇಲಿದರೆ ನೆಹೆರೂ ಬಾಲಬಡುಕರೊಂದಷ್ಟು ಜನ ಬೇರೆಯದೇವಾದ ಮಂಡಿಸುತ್ತಾರೆ.ನೆಹೆರೂ ’ಚರಿಶ್ಮಾ’ ಗಾಂಧೀಜಿಯನ್ನು ಸೆಳೆದಿತ್ತು.ನೆಹೆರೂ ಜನ್ಸಮೂಹವನ್ನು ಸೆಳೆಯುವ ನಾಯಕರಾಗಿ ರೂಪಗೊಂಡಿದ್ದರು.ಹಾಗಾಗಿಯೇ ಅವರು ನೆಹೆರೂರನ್ನು ಅಧ್ಯಕ್ಶ ಪೀಠಕ್ಕೇರಿಸಿದರು ಎನ್ನುತ್ತಾರೆ.

ನಿಜ ಏನು ಗೋತ್ತಾ?ಗಾಂಧೀಜಿ ಬಾಹ್ಯರೂಪಕ್ಕೆ ಮಾರುಹೋಗುವಷ್ಟು ದಡ್ಡರಾಗಿರಲಿಲ್ಲ.ಅವರು ಇತಿಹಾಸವನ್ನು ಚೇನ್ನಾಗಿಯೇ ಬಲ್ಲವರು.ಜಗತ್ತಿನ ರಾಷ್ಟ್ರಗಳ ಭೂತಕಾಲ ಕೆದಕಿದರೆ ಚರಿಶ್ಮಾ ಇದ್ದ ನಾಯಕರೆಲ್ಲಾ ತಮ್ಮ ರಾಷ್ಟ್ರವನ್ನು ನಾಶಗೋಳಿಸಿದವರಷ್ಟ್ರೇ ಅಲ್ಲ,ಇತರ ರಾಷ್ಟ್ರಗಳಿಗೂ ತೋಂದರೆ ಉಂಟುಮಾಡಿದವರೇ.ಇಂಥಹ ನಾಯಕರ ದೈಹಿಕ ರೂಪದಿಂದ,ಮಾತಿನ ದಾಟಿಯಿಂದ ಸಮ್ಮೋಹನಕ್ಕೆ ಒಳಪಡುವ ಜನ ಅವರನ್ನೇ ಅನುಸರಿಸಿ ವಿನಾಶಕ್ಕೆ ಪ್ರಪಾತಕ್ಕೆ ಬೀಳುವುದು ಖಂಡಿತ ಹೊಸತಲ್ಲ.ಅಲೆಕ್ಸಾಂಡರನ ತಂದೆ ಒಮ್ಮೆ ಉದ್ದರಿಸಿದರು,"ಡೆಮಾಸ್ತನೀಸನನ್ನು ಕಂಡಾಗ ಆಗುವಷ್ಟು ಭಯ ಬೇರೆಯವರನ್ನು ಕಂಡರೆ ಆಗದು.ಆತ ಅದ್ಬುತವಾಗಿ ಮಾತನಾಡುತ್ತಾನೆ.ಅವನ ಮಾತುಗಳನ್ನು ಕೇಳುತ್ತಿದ್ದರೆ ನನ್ನ ಮೇಲೆ ನನೇ ಯುದ್ಧ ಮಾಡುವಂತಾಗುತ್ತದೆ".

ಅಲೆಕ್ಸಾಂಡರನನ್ನು ಬಿಟ್ಟಾರೆ ಜಗತ್ತಿನ ಯಾವ ನಾಯಕನೂ ಬಾಹ್ಯರೂಪದಿಂದ ಜನರನ್ನು ಮರುಳುಗೊಳಿಸುವಂತಹ ಚರಿಶ್ಮಾ ಹೋಂದಿರಲೇ ಇಲ್ಲ.ತತ್ವ ಜ್ನಾನದಲ್ಲಿ ಹೊಸದಿಕ್ಕು ತೋರಿದ ಅರಿಸ್ಟಾಟಲ್ , ಪ್ಲೇಟೋ , ಕೆಂಟ್, ಹ್ಯೂಮ್ , ಬಟ್ರಾನಂಡ್ ರೆಸೆಲ್ ; ಯುದ್ಧದಲ್ಲಿ- ಒಕ್ಕಣ್ಣ ಹನಿಬಾಲ್ , ಮಧ್ಯವಯಸ್ಕ-ತಲೆಗೂದಲಿಲ್ಲದ ಸೀಸರ್ , ಜೆಂಗೀಸ್ ಖಾನ್ , ಕುಳ್ಲ ನೆಪೋಲಿಯನ್ , ಒಕ್ಕಣ್ಣ ನೆಲ್ಸನ್ , ಉದ್ದ ಮೂಗಿನ ಡ್ಯೂಕ್, ಗ್ಯಾರಿಬ್ಯಾಲ್ಡಿ , ಮಾವೊತ್ಸೆತುಂಗ್ , ರಾಜಕಾರಣದಲ್ಲಿ - ಪೆರಿಕ್ಲಿಸ್ , ಬಿಸ್ಮಾರ್ಕ್ , ಜಾರ್ಜ್ ವಾಷಿಂಗ್ಟನ್ ಇವರಾರೂ ಆಕರ್ಶಕ ರೂಪದವರಲ್ಲವೇ ಅಲ.ಅಬ್ರಾಹಾಂ ಲಿಂಕನ್,ಲೆನಿನ್ ಎಲ್ಲ ಬಿಡಿ ಸ್ವತ: ಮಹಾತ್ಮಾ ಗಾಂಧಿ ಕೂಡ ಯಾವುದೇ ಕಾರಣಕೂ ಹೇಂಗಸರಿಗೆ-ಗಂಡಸರಿಗೂ ಆಕರ್ಷಕ ಎನಿಸುತ್ತಿರಲಿಲ್ಲ.
ಆದರೆ... ಅವರಲ್ಲರಲ್ಲೂ ಸಿಸ್ವಾರ್ಥ ಸೇವೆಯ ತುಡಿತದಿಂದ ಜಾಗೃತವಾದ ನೈತಿಕ ಪ್ರಜ್ನ್ದೆ ಇತ್ತು.ಪಾರದರ್ಶಕತೆ ಇತ್ತು.ನಂಬಿಕೆ - ವಿಶ್ವಾಸವನ್ನು ಇತರರಲ್ಲಿ ಉದ್ವೀಪನಗೋಳಿಸುವ ಶ್ಕ್ತಿ ಇತ್ತು.ಹೇಳಿ,ಇವೆಲ್ಲ ನೆಹೆರೂಗಿತ್ತು ಎಂದು ಯಾವ ಕಾರಣಕ್ಕಾದರೂ ಎನಿಸುತ್ತದೆಯೇ? ಆದರೂ ನೆಹೆರೂ ಅಧ್ಯಕ್ಶಗಾದಿಗೇರುವ ನಿರ್ಣಯ ಕೈಗೊಳ್ಳಲಾಯ್ತು!
ಈ ನಿರ್ಣಯದ ನಂತರವೇ ನೆಹೆರೂ ಆಜ್ನೆ ಪಾಲಿಸುವುದನ್ನು ಬಿಟ್ಟು ಆಜ್ನೆ ನೀಡುವ ಕಾಯಕ ಶುರುವಿಟ್ಟಿದ್ದರು.ತನಗಿಂತ ಮೇಲೆ ಯಾರು ಇರಬಾರದೆಂಬ ಪಕ್ಕಾ ಸ್ವಾರ್ಥಿ ಮನೋಭಾವನೆ ಅವರಲ್ಲಿ ಮೋಳೆತದ್ದು.ಈ ಚಿಂತನೆಯೇ ಹೆಮ್ಮರವಾಗಿ ಕೊನೆಯವರೆಗೂ ನೆಹೆರೂ ಪಟೇಲರನ್ನೂ ತುಚ್ಚೀಕರಿಸಿದ್ದು!
ಈ ನಿರ್ಣಯದ ನಂತರವೇ ಈ ದೇಶದಲ್ಲಿ ಪಾರಿವಾರಿಕ ಆಡಳಿತದ ಕಲ್ಪನೆ ಶುರುವಾಗಿದ್ದು.ರಾಜರುಗಳ ಆಳ್ವಿಕೆಯ ನಂತರ ಇಲ್ಲಿ ಎಂದಿಗೂ ಅಸಮರ್ಥ ಪರಿವಾರ ಆಡಳಿತ ನಡೀಸಿಯೇ ಇಲ್ಲ.ಆದರೆ ಮೋತಿಲಾಲರ ನಂತರ ಅಧಿಕಾರ ಅಡೆದ ನೆಹೆರೂ ತಮ್ಮ ನಂತರ ಅದು ಇಂದಿರಾಳ ಕೈ ಸೇರುವಂತೆ ವ್ಯವಸ್ಥೆ ರುಪುಗೋಳಿಸಿದ್ದರು.ಅನಂತರ ಅದು ರಾಜೀವ್ ಗಾಂಧಿಯ ಕೈಗೆ,ಅಲ್ಲಿಂದ ಸೋನಿಯಾರ ತೆಕ್ಕೆಗೆ ಬಿತ್ತು!
ಎಲ್ಲವೂ ಆ ನಿರ್ಣಯದ್ದೇ ಪರಿಣಾಮ.ದುರಂತವೆಂದರೆ,ಅಂಥದ್ದೊಂದು ಕೆಟ್ಟ ನಿರ್ಣಯಕ್ಕೆ ಕಾರಣರಾಗಿದ್ದು ಮೋಹನದಾಸ ಕರಮಚಮ್ದ ಗಾಂಧೀ!
ಗಾಂಧಿಈಜಿಯವರನ್ನು ಅದಕ್ಕೆ ಪ್ರೇರೇಪಿಸಿದ್ದಾದರು ಏನು?ಅವರಿಗೆ ನೆಹೆರೂರೋಂದಿಗೆ ಅಷ್ಟೊಂದು ಸ್ನೇಹ ಸಂಬಂಧವಿತ್ತೇ?ದೇಶವನ್ನೇ ಹಳಕ್ಕೆ ತಳುವಷ್ಟರ ಮಟ್ಟಿಗೆ ನೆಹೆರೂ ಗಾಂಧೀಜಿಯ ಮನ್ಸನ್ನು ಆಕ್ರಮಿಸಿಕೊಂಡಿದ್ದರೇ?೧೯೨೯ರಲ್ಲಿ ಗಾಂಧೀಜಿ ಪತ್ರಿಕೆಯೊಂದರಲ್ಲಿ , ’ಪಟೇಲರು ಎಂತಹ ಸಂದರ್ಭದಲ್ಲೂ ನನ್ನೊಂದಿಗಿರುತ್ತಾರೆಂಬ ಭರವಸೆ ನನ್ಗಿದೆ’ ಎಂದು ಬರೆದಿದ್ದರು.ಅದರರ್ಥ ಸ್ಪಷ್ಟ ಮೋತಿಲಾಲರು ಕಾಂಗ್ರೆಸನ್ನು ಒಡೆಯುವ ಬೆದರಿಕೆ ಒಡ್ಡಿದ್ದಿರಬಹುದು.ತಮ ಮಗನ ಪರವಾಗಿದ್ದ ಪ್ರಾಂತೀಯ ಸಮಿತಿಯ ಮೂರು ಜನರನ್ನು ಬೇರೆ ಮಾಡಿ ಪ್ರತ್ಯೇಕ ಕಾಂಗ್ರೆಸ್ಸಿನ ರಚನೆ ಮಾಡುವ ತಮ್ಮ ಯೋಜನೆಯನ್ನು ಗಾಂಧೀಜಿಯ ಮುಂದಿರಿಸಿದ್ದಿರಬಹುದು.ಕಾಂಗ್ರೆಸ್ಸು ಒಡೆದರೆ ಅದು ಮಾಡಬಹುದಾದ ಸಷ್ಟಕ್ಕಿಂತ ನೆಹೆರೂ ಅಧ್ಯಕ್ಶರಾಗುವುದು ಒಳ್ಳೆಯದು ಎಂದು ಗಾಂಧೀಜಿ ಭಾವಿಸಿರಬಹುದು! ಇಲ್ಲದೇ ಹೋದರೆ,ಎರಡೆರಡು ಬಾರಿ ನೆಹೆರೂರನ್ನು ಬಿಟ್ಟು ಬೇರೆಯವರನ್ನೇ ಅಧ್ಯಕ್ಶ ಪದವಿಯಲ್ಲಿ ಕುಳಿರಿಸಿದ್ದ ಗಾಂಧೀಜಿ ಮುರನೇ ಬಾರಿ ಮಣಿಯುವುದು ಸಾಧ್ಯವೇ ಇರಲಿಲ್ಲ ಅಲ್ಲವೇ?

ನೆಹೆರೂ ಇದ್ದಷ್ಟು ಕಾಲ ಕಾಂಗ್ರೆಸ್ಸಿಗೆ ಕಿರಿ ಕಿರಿಯೇ. ಪಟೇಲರಂತಹ ಮುತ್ಸದ್ದಿಗಳನ್ನೊಳಗೊಂಡ ರಾಷ್ಟ್ರೀಯ ಚಿಂತಕರ ತಂಡ ನೆಹೆರೂ ಪಾಲಿನ ಕಡುವೈರಿ. ತಮ್ಮ ಸಮಾಜವಾದಿ ಧೋರಣೆಯನ್ನು ಕಾಂಗ್ರೆಸ್ಸಿಗರ ಮೇಲೆ ಹೇರಿ ತನ್ಮೂಲಕ ರಾಷ್ಟ್ರಕ್ಕೇ ಸಮಾಜವಾದಿ ದಾರಿ ತೋರಿಸಿಕೊಡಬೇಕೆಂಬ ಆತುರ ನೆಹೆರೂರಿಗಿತ್ತು.ಒಂದಷ್ಟು ಬಾಲಬಡುಕರನ್ನು ಬಿಟ್ಟರೆ ಉಳಿದವರೆಲ್ಲ ಇದನ್ನು ಪಟ್ಟಾಗಿ ವಿರೋಧಿಸಿದವರೇ.ಒಮ್ಮೆಯಂತೂ ಕಾಂಗ್ರೆಸ್ಸಿನಿಂದ ಹೊರಬಂದುಬಿಡುತ್ತೇವೆ ಎಂದು ಕೆಲವರು ಗಾಮ್ಧೀಜಿಯ ಬಳಿ ನೋವಿನಿಂದ ಹೇಳಿಕೋಳ್ಳುತ್ತಿದ್ದರು.ಆಗೆಲ್ಲ ಗಾಂಧೀಜಿ ನೆಹೆರೂರನ್ನು ಕರೆದು ಬುದ್ಧಿ ಹೇಳಬೇಕಾಗಿತ್ತಿತ್ತು, " ನಿಷ್ಠ ಕಾಂಗ್ರೆಸ್ಸಿಗರು ನೋವಿನಿಂದ ಹೊರಬರುತ್ತೇವೆಂದರೆ ಅದರಲ್ಲಿ ನಿನ್ನದೇ ಹೆಚ್ಚು ಪಾಲು.ನಿಮ್ಮ ನಡುವಿನ ಜಗಳ ರಾಷ್ಟ್ರಕ್ಕೆ ಗಂಡಾಂತರಕಾರಿಯಾಗದಿರಲಿ.ಎಚ್ಚರ!" ಎಂದು ಹೇಳುತ್ತಿದ್ದರು.ಇಷ್ಟಾದರೂ ನೆಹೆರೂರವರೆಡೆಗಿದ್ದ ಗಾಂಧೀಜಿಯ ಪ್ರೇಮ ಖಂಡಿತ ಕಡಿಮೆಯಾಗಿರಲಿಲ್ಲ.
ಅಮೆರಿಕಾ ಖ್ಯಾತ ಅಧ್ಯಕ್ಶ ಅಧಿಕಾರಿ ಮ್ಯಾಕ್ ನಮಾರಾ ನೆಹೆರೂ ಬಗ್ಗೆ ಮಾತನಾಡುವಾಗಲೆಲ್ಲ."ಮೋತಿಲಾಲರಿಗೆ ಹಿಟ್ಟಿರದಿದ್ದರೆ,ಮಹಾತ್ಮರ ಪಾಳಯಕ್ಕೆ ಬರದಿದ್ದರೆ ಜವಾಹರ ನೆಹೆರೂ ಅದೆಲ್ಲಿರುತ್ತಿದ್ದರು?" ಎಂದು ಪ್ರಶ್ನಿಸುತ್ತಾರೆ." ಇಂಡಿಯಾ ಫ್ರಂಕರ್ಜುನ್ ಟು ನೆಹೆರೂ" ಪುಸ್ತಕದ ರಚನಕಾರರಾದ ದುರ್ಗಾದಾಸರಂತೂ" ಗಾಂಧೀಜಿ ಮಾರ್ಕೆಟ್ ಮಾಡಿಸಿಕೊಟ್ಟಂತಹ ವನ್ತು ನೆಹೆರೂ " ಎಂದೇ ಕಟಕಿಯಾಡುತ್ತಾರೆ! ನಾವು ಅಪ್ಪಿಕೊಂಡ ಅದೇ ನೆಹೆರೂ ನಮಗೇ ಮಾರಕವಾದರು. ಅದೇ ದುರಂತ.
ಚಿತ್ರ ಕೃಪೆ :http://www.oberlin.edu

Comments Posted (0)